ನಸುಗಾರ ಕಲಾಂ
ನಿಜಾಂ ಆಸ್ಪತ್ರೆಗೆ ಭೇಟಿ ಇಟ್ಟು ,
ರೋಗಿಗಳ ವೇದನೆ ಕಂಡ ವಿಜ್ಞಾನಿ ,
ಮೂರೇವಾರದ ಸತತ ಶ್ರಮದಲಿ .
ಮೂರೂಕಿಲೋಗ್ರಾ೦ ಕ್ಯಾಲಿಪರ್ ಆಯಿತು ಬರೀ ಮುನ್ನೂರು ಗ್ರಾಂ !
ರೋಗಿಗಳ ಕಣ್ಣಲಿ ಹೊರಟಿತು ಆನಂದ
ತುಂಬಿ ಬಂದಿತು ವೈದ್ಯರ ಹೃದಯ
ಇಂತಹ ವಿಜ್ಞಾನಿ ಯಾರು ಗೊತ್ತೇ ?
ಅವರೇ, ನಮ್ಮ ಹೆಮ್ಮೆಯ ಮಾಜಿ ರಾಷ್ಟ್ರಪತಿ ಅಬ್ಧುಲ್ ಕಲಾಂ !
ಹಾರುವ ಹಕ್ಕಿಗಳ ಕಂಡನು ಬಾಲಕನು
ತಾನೂ ಹಾರುವ ಕನಸನು ಕಂಡನು
ಈ ಕನಸುಗಾರನೇ ಶ್ರೇಷ್ಠ ವಿಜ್ಞಾನಿ ಯಾದನು
ರಾಕೆಟ್,ಕ್ಷಿಪಣಿ ,ತಂತ್ರಜ್ಞಾನ ಕ್ಷೇತ್ರದಲಿ ಗಗನದೆತ್ತರಕ್ಕೇರಿಸಿದ ಭಾರತವನು !
ಅಗ್ನಿಯ ರೆಕ್ಕೆ ಗಗಳ ಹೆಸರಲಿ
ಬರೆದನು ತನ್ನಯ ಆತ್ಮ ಕಥನದಲಿ
ಇಂದಿನ ಮಕ್ಕಳಿಗೆ ಹೇಳುವ ಗುಟ್ಟು
“ಮಕ್ಕಳೇ ಕನಸು ಕಾಣಿರಿ” ಕನಸುಗಳೇ ಆಲೋಚನೆಗಳು,ಕೃತಿ ಆಲೋಚನೆಗಳ ಫಲ !
ಪದ್ಮ ಭೂಷಣ ,ಪದ್ಮವಿಭೂಷಣ ,ಭಾರತ ರತ್ನ
ಕಲಾ೦ ನ ಸಾಧನೆ ಹಲವಾರು,
ಮರೆಯಾದ ಕಲಾಂ ಜನ್ಮದಿನವನು
ವಿಶ್ವ ಸಂಸ್ಥೆ ಘೋಷಣೆ ಮಾಡಿತು , ವಿಶ್ವ ವಿದ್ಯಾರ್ಥಿ ದಿನವ !
ಅಧ್ಬುತ ಕಲಗಾರ ! ಅಬ್ಧುಲ್ ಕಲಾಂಗೆ !
ಮಕ್ಕಳ ಪ್ರೀತಿಯ ವಿಜ್ಞಾನಿ ಗೆ !
ಅಲ್ಪೈನೆ ಶಾಲೆಯ ಮಕ್ಕಳ
ನಮನ ,ನಮನ, ಹೃದಯ ಪೂರ್ವಕ ನಮನ!
ಪದ್ಮಕ್ಷಿ .ಎಸ್
ಕನ್ನಡ ಪ್ರಾದ್ಯಾಪಕಿ .